ಉಪ್ಪು ತಿಂದವನು ನೀರು ಕುಡಿಯಲೇ ಬೇಕು
-
- Oct 22, 2020
- 1 min read

ನೀವು ಎಂದಾದರೂ ಒಂದು ಚಮಚ ಉಪ್ಪನ್ನು ಬಾಯಿಗೆ ಹಾಕಿಕೊಂಡಿದ್ದೀರಾ? ಇಲ್ಲವಾದರೆ ಇವತ್ತೇ ಮಾಡಿ ನೋಡಿ. ಉಪ್ಪು ತಿಂದ ತಕ್ಷಣ ಬಾಯೆಲ್ಲಾ ಒಗರು ಎನಿಸಿ ತಕ್ಷಣ ದಾಹವಾಗುತ್ತದೆ. ನೀರು ಕುಡಿಯಬೇಕು ಎನಿಸುತ್ತದೆ. ಇದೊಂದು ನಿತ್ಯಜೀವನದ ಸತ್ಯ.
ಹಾಗಾದರೆ ಈ ಗಾದೆಯ ಗುಟ್ಟೇನು? ಉಪ್ಪು ತಿನ್ನುವುದೆಂದರೆ ಬೇಡದಿರುವ ಕೆಲಸ ಮಾಡುವುದು. ಅಗತ್ಯ ಇರದ ಕಾರ್ಯವನ್ನು ಎಸಗುವುದು. ಆ ಕಾರ್ಯ ಆ ಸಮಯಕ್ಕೆ ಆ ಸ್ಥಳದಲ್ಲಿ ಬೇಕಾಗಿರುವುದಿಲ್ಲ. ಆದರೆ ಅದನ್ನು ಮಾಡಿರುತ್ತೇವೆ. ಹಾಗೆ ಮಾಡಿದ್ದಲ್ಲಿ ನೀರು ಕುಡಿಯಲೇ ಬೇಕು. ಅಂದರೆ, ಅದರಿಂದ ಆಗಬಹುದಾದ ಪರಿಣಾಮವನ್ನು ಅನುಭವಿಸಲೇಬೇಕು. ನಾವು ಮಾಡಿದ ಕಾರ್ಯಕ್ಕೆ ಪ್ರತಿಫಲವನ್ನು ಪಡೆಯಲೇಬೇಕು.ಕೆಟ್ಟ ಕೆಲಸವಾದಲ್ಲಿ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ಒಳ್ಳೆಯ ಕೆಲಸವಾಗಲಿ ಅದರ ಪರಿಣಾಮ ಒಳ್ಳೆಯದೇ ಆಗಿರುತ್ತದೆ.
ಈ ಗಾದೆಯನ್ನು ಹೆಚ್ಚಾಗಿ ಕೆಟ್ಟ ಕೆಲಸ ಸಂದರ್ಭ ಉಪಯೋಗಿಸುತ್ತಾರೆ. ಉಪ್ಪು ತಿಂದ ಪರಿಣಾಮ ಸುಖಕರವಾಗಿರದು.
ಯಾವುದಾದರೂ ಕುಕರ್ಮದ ಪರಿಣಾಮ ನಮಗೆ ಸುಖದಾಯಕವಾಗುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು.